ಚಿತ್ರ ವಿಮರ್ಶೆ: ಕಳ್ಳರ ಸಂತೆ
ಈ ವಾರ ತೆರೆಕಂಡಿರುವ ಅಗ್ನಿಶ್ರೀಧರ್ ರವರ ’ ಕಳ್ಳರ ಸಂತೆ’ ಅದು ಹುಟ್ಟು ಹಾಕಿದ ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಸಿ ಮಾಡಿವೆ. ಮೊದಲೆರಡು ಚಿತ್ರಗಳಲ್ಲಿದ್ದ ಮೊನಚು ಕಳೆದು ಹೋಗಿದೆ. ’ಆ ದಿನಗಳು’ ಮತ್ತು ’ಸ್ಲಂ ಬಾಲ’ ಚಿತ್ರಗಳು ನೈಜ ಘಟನೆಗಳ ಆಧಾರಿತ ಕೃತಿಗಳು. ಆದರೆ ’ ಕಳ್ಳರ ಸಂತೆ’ ಯಲ್ಲಿ ನೈಜತೆ ಮಾಯವಾಗಿ ಕಾಲ್ಪನಿಕ ಚಿತ್ರವಾಗಿ ಹಾಸ್ಯಾಸ್ಪದವಾಗಿದೆ.
ಚಿತ್ರದ ಆರಂಭದ ದೃಶ್ಯದಲ್ಲಿ ನಮ್ಮ ನಾಯಕನನ್ನು ಪೋಲಿಸರು chase ಮಾಡುತ್ತಾರೆ. ಆತ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ಈ ನಡುವೆ ಒಬ್ಬ ದಾರಿಹೋಕ ಟಿವಿ ಚಾನೆಲ್ ಒಂದಕ್ಕೆ ಸುದ್ದಿ ಕೊಡುತ್ತಾನೆ. ತದ ನಂತರ flashbackನಲ್ಲಿ ಕತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಮ್ಮ ನಾಯಕ ಕನ್ನಡ ಪದವೀಧರ. ಕೆಲಸ ಸಿಗೋದಿಲ್ಲ. ಸರ್ಕಾರಿ ನೌಕರಿಯಲ್ಲಿ “ಲಂಚಾವತಾರ” ದ ದರ್ಶನವಾಗುತ್ತದೆ. ಬಹುರಾಷ್ಟ್ರೀಯ ಕಂಪನಿಗಳು ಕ್ಯಾರೆ ಅನ್ನುವುದಿಲ್ಲ . ಆತ ಒಂದು ಸಣ್ಣ ಕ್ಯಾಂಟೀನ್ ಪ್ರಾರಂಭಿಸುತ್ತಾನೆ ಲೋಕಲ್ ಎಮ್ ಎಲ್ ಎ ಇಂದ ಕಿರುಕಳ ಅನುಭವಿಸುತ್ತಾನೆ.ಕ್ಯಾಂಟೀನ್ ಸುಟ್ಟುಹೋಗುತ್ತದೆ.ಕೊನೆಗೆ ಅವನು ಕಳ್ಳತನಕ್ಕೆ ಇಳಿಯುತ್ತಾನೆ.ಇವನಲ್ಲಿ ಸೂಕ್ಷ್ಮ ಸಂವೇದನೆಯನ್ನು ಹುಡುಕಿ ಆರೋಪಿಸಿದ್ದಾರೆ ನಿರ್ದೇಶಕರು. ಇಂತಹ ಸೂಕ್ಷ್ಮ ಸಂವೇದನೆಯು ನಮ್ಮ ಘನ ಸರ್ಕಾರವನ್ನು ಉರುಳಿಸುವುದರಲ್ಲಿ ಸಫಲವಾಗುತ್ತದೆ??
ಇಲ್ಲಿನ ಪ್ರಸಂಗಗಳು ಹಾಸ್ಯಾಸ್ಪದವಾಗಿದೆ. ಕೋಟ್ಯಾಂತರ ರೂಪಾಯಿಗಳ ಏರುಪೇರಿನಿಂದಲೇ ಸರ್ಕಾರ ಉರುಳಿಸಲು ಸಾಧ್ಯವಿಲ್ಲ ಆದರೂ ನಮ್ಮ ಸೂಕ್ಷ್ಮ ಸಂವೇದನೆಯ ನಾಯಕ ಅದರಲ್ಲಿ ಯಶಸ್ವಿ! !
ಇಲ್ಲಿ ಪ್ರಸ್ತುತ ವಿದ್ಯಮಾನಗಳನ್ನೆಲ್ಲ ಒಂದೇ ಕಡೆ ತೋರಿಸುವ ಪ್ರಯತ್ನವಾಗಿದೆ . ಅದರಲ್ಲಿ ಶ್ರೀಧರ್ ಎಡವಿದ್ದಾರೆ. ಕನ್ನಡ ಭಾಷಾಪ್ರೇಮ ಅತಿಯಾಗಿದೆ. ಕನ್ನಡ ಮಾತನಾಡುವುದರಿಂದ ಅಸ್ತಮಾ ಕಾಯಿಲೆ ಗುಣವಾಗುತ್ತದೆ ಎನ್ನುವ ಠರಾವಿನ ತನಕ. ಹಾಗಿದ್ದರೆ ಕನ್ನಡಿಗರಿಗೆ ಯಾರಿಗೂ ಅಸ್ತಮಾ ಇರಲೇಬಾರದಿತ್ತಲ್ಲವೆ…..
ಎಲ್ಲ ಬುದ್ದಿಜೀವಿಗಳ , ರಾಜಕಾರಣಿಗಳ ಗೋಸುಂಬೆ ಬಣ್ಣ ಬಯಲು ಮಾಡುತ್ತಾ ಆವೇಶದಲ್ಲಿ ಹಾಸ್ಯಾಸ್ಪದ ದೃಶ್ಯ ಸಂಯೋಜನೆಯಿಂದ ಚಿತ್ರ ನೀಟಾಗಿ ಎಡವುತ್ತದೆ. ನಾಯಕ ಯಶ್ ,ನಾಯಕಿ ಹರಿಪ್ರಿಯಾ ಚೆನ್ನಾಗಿ ಅಭಿನಯಿಸಿದ್ದಾರೆ ಮುಂದೆ ಭರವಸೆಯ ಕಲಾವಿದರಾಗುತ್ತಾರೆಂದು ಸಂತೋಷ ಪಡೋಣ. ರಂಗಾಯಣ ರಘು ತಮ್ಮ ಎಂದಿನ ಶೈಲಿಯಲ್ಲಿ ಪಾತ್ರಕ್ಕೆ ಜೀವ ತುಂಬುತ್ತಾರೆ. ಮುಖ್ಯಮಂತ್ರಿಯಾಗಿ ಏಕಕಾಲದಲ್ಲಿ ನಮ್ಮ ಮಾಜಿ ಮುಖ್ಯಮಂತ್ರಿಗಳನ್ನು, ಹಾಲಿ ಮುಖ್ಯಮಂತ್ರಿಗಳನ್ನು ನೆನೆಪಿಸುತ್ತಾರೆ. ವಿ.ಮನೋಹರ್ ಸಂಗೀತ ಓಕೆ. ಸುಂದರ್ ನಾಥ ಸುವರ್ಣರ ಛಾಯಾಗ್ರಹಣ ಕಣ್ ಸೆಳೆಯುತ್ತದೆ.
ಕೊನೆಯದಾಗಿ, ನಿಮಗೆ time ಜಾಸ್ತಿ ಇದ್ದು, ಮಾಡಲು ಕೆಲಸವಿಲ್ಲದ್ದಿದ್ದಲ್ಲಿ ಈ ಚಿತ್ರ ನೋಡಬಹುದು.
No comments:
Post a Comment