Tuesday, November 10, 2009

Sarpa Sambandha

ಸರ್ಪ ಸಂಬಂಧ

ಒಂದು ಸುಧೀರ್ಘ ಸರ್ಪ ವ್ರುತ್ತಾಂತ. ಓದಿ ಮುಗಿಸಿದರೆ ಮನೆಯಲ್ಲಾ ಹುತ್ತ! ಆ ಪರಿ ಕಾಡಿದ ಕಾದಂಬರಿ ಇದು. ದೇವರಿದ್ದಾನೋ-ಇಲ್ವೋ ಆದರೆ ಅದರ ಸುತ್ತ ಪೂಜೆ-ಪುನಸ್ಕಾರ-ಹೋಮ-ಹವನ ಮುಂತಾದವು ಬೆಳೆದಿದೆ. ಹಾಗೆಯೇ ದೆವ್ವವಿದೆಯೋ ಇಲ್ವೋ ಅದರ ಸುತ್ತ ಕೂಡ ಇಂಥದೇ ಒಂದು ವಾಮ ಪ್ರಪಂಚ ಬೆಳೆದಿದೆ ಎಂಬ ಲೇಖಕರ ಮಾತಿನಂತೆ ಸರ್ಪ ಕಾಡುತ್ತೆ; ಮನುಷ್ಯ ಸಂಬಂಧಗಳು ಕಾಡುತ್ತೆ.. ಕೂನೆ ತನಕ ತನ್ನ ನಿಗೂಢತೆ ಉಳಿಸಿಕೊಳ್ಳುತ್ತದೆ.


ಅಳ್ಳೆದೆಯವರು ಓದಲು ಸಾಧ್ಯವಾಗದಂತಹ ಕೌರ್ಯವಿದೆ. ’ಇನಿ’ ಎಂಬ ಮುದ್ದಾದ ಹೆಸರಿನ ಪುಟ್ಟ ಹುಡುಗಿ ಸರ್ಪ ಸಂತಾನ. ಸರ್ಪ ಶಿಶು. ಇನಿ ಎಂಬ ಮುದ್ದಿನ ಹೆಸರಿಗೂ ಅದರ ನಡವಳಿಕೆಗೂ ಅಕ್ಷರಶಃ ತಾಳೆಯಾಗದು. ಒಂದೇ ಬಾರಿ ಮಮಕಾರ ಮತ್ತು ಭಯ ಬೆರೆತ ಆಶ್ಚರ್ಯವಿದೆ ಆ ಪಾತ್ರದಲ್ಲಿ. ಈ ಪಾತ್ರ ಪೋಷಣೆಯಲ್ಲಿ ಲೇಖಕ ದಿಗ್ವಿಜಯಿ.


ಮಾಟಗಾತಿಯ ಮುಂದುವದಿದ ಭಾಗವಾದ್ದರಿಂದ ನಮಗೆ ಅಗ್ನಿನಾಥ ಗೊತ್ತು. ತೇಜಮ್ಮ ಗೊತ್ತು. ನಿಹಾರಿಕೆ ಗೊತ್ತು. ಆದರೆ, ಅಚ್ಚರಿ ಹುಟ್ಟಿಸುವುದು ಇನಿಯ ಪಾತ್ರ ಪೋಷಣೆ. ಸುಮಾರು ಒಂದೂವರೆ ದಶಕ ಕಾದು ಗುಣಶಾರಿ ಇನಿಗೆ ಜನ್ಮ ನೀಡುತ್ತಾಳೆ. ಅದು ಸರ್ಪ ಸಂತತಿ. ಈ ಕಲ್ಪನೆಯೇ ರೋಚಕ. ಮನುಷ್ಯರ ಹೊಟ್ಟೆಯಲ್ಲಿ ಸರ್ಪ ಜನ್ಮ ತಾಳುವುದೆಂದರೆ? ಎಲ್ಲೂ ಕೂಡ ಲಿಂಕ್ ತಪ್ಪದಂತೆ ಒಂದೆ ಸಮನೆ ಹರಿಯುವ ಝರಿಯಂತೆ ಸಾಗುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಯಶಸ್ಸಿನ ತುತ್ತುದಿ ತಲುಪುವ ಪ್ರಯತ್ನದಲ್ಲಿ ಮನುಷ್ಯ ಈ ಪರಿ ಕ್ರೂರಿಯಾಗಲು ಸಾಧ್ಯವೆ ಅಂತ ಅಚ್ಚರಿ ಹುಟ್ಟಿಸುತ್ತಾಳೆ ಮಾಟಗಾತಿ.


ಅಸಲು ಆಕೆ ಅಮಾಯಕಿಯಲ್ಲ, ಪ್ರಾಣಿಯಲ್ಲ, ಪಕ್ಷಿಯಲ್ಲ, ಮನುಷ್ಯಳು ಅಲ್ಲ ಎಂಬ ತೀರ್ಮಾನಕ್ಕೆ ಅಗ್ನಿನಾಥ ಬರುವ ಹೊತ್ತಿಗೆ ಅವಳು ಕೌರ್ಯದ ತುತ್ತುದಿ ತಲುಪಿರುತ್ತಾಳೆ. ಇದಕ್ಕೆ contrast ಆಗಿ ಅಗ್ನಿನಾಥನ ಬೆಳೆದಿದ್ದಾನೆ. ಅಗ್ನಿನಾಥನೆಂಬ ಹೆಸರೆ ನಮಗೆ ಎಂದು ರೀತಿಯ ಸಂಚಲನ ಉಂಟು ಮಾಡುತ್ತೆ. ಅವನ ಆತ್ಮವಿಶ್ವಾಸ ನಮಗಿರಬಾರದೇ ಅಂತಲೂ ಅನಿಸುತ್ತದೆ. ಸಾಧನೆಯ ಗಿರಿಶಿಖರ ತಲುಪಿದರೂ ಮನುಷ್ಯ ಸೌಮ್ಯನಾಗಿರಬಲ್ಲ ಎಂಬುದಕ್ಕೆ ನಿದರ್ಶನದಂತೆ ನಿಲ್ಲುತ್ತಾನೆ ಅಗ್ನಿನಾಥ.


ಇದೆಲ್ಲದರ ನಡುವೆ ನಮಗೆ ವಿಶ್ವನಾಥ-ಚಿತ್ರಾ ಎದುರಾಗುತ್ತಾರೆ. ಅಗತ್ಯವಿರದೆ ಸುಮ್ಮನೆ ಕಾದಂಬರಿಯೊಳಕ್ಕೆ ಅತಿಕ್ರಮ ಪ್ರವೇಶ ಮಾಡಿಬಿಡುತ್ತಾರೆ. ಮತ್ತು ನಮ್ಮ ಕಲ್ಪನೆಯ ಓಘಕ್ಕೂ ಕಡಿವಾಣ ಹಾಕುತ್ತಾರೆ. ವಾಮ ಪ್ರಪಂಚದಲ್ಲಿ ತೇಲಿ ಮುಳುಗುವ 
ನಮಗೂಂದು relief ಕೂಡಲು ಲೇಖಕರು ಮುಂದಾಗಿದ್ದಾರಾ? ಗೊತ್ತಿಲ್ಲ.


ಮಾಟಗಾತಿ-ಸರ್ಪ ಸಂಬಂಧ ಒಂದು ಕಾಲ್ಪನಿಕ ಕಾದಂಬರಿ. Work of fiction. ಆದರೆ, ಇದರ ಪಾತ್ರಗಳು ಕಾಲ್ಪನಿಕವೆಂಬಂತೆ ರೂಪುಗೂಂಡಿಲ್ಲ. ಎಲ್ಲರಲ್ಲೂ ತೇಜಮ್ಮ ಎಂಬೋ ಮಾಟಗಾತಿ ಇದ್ದಾಳೆ; ಅಗ್ನಿನಾಥನಿದ್ದಾನೆ. ನಿಹಾರಿಕೆಯಿದ್ದಾಳೆ. ಒಂದು ಕಾದಂಬರಿಯ ಗೆಲುವು ಅದೇ ಅಲ್ಲವೇ?
ತಂತ್ರ-ಮಂತ್ರಗಳ ಕುರಿತಾಗಿ ಕನ್ನಡದಲ್ಲಿ ಬಂದಿರುವ ಕೆಲವೇ ಕಾದಂಬರಿಗಲ್ಲಿ ಮಾಟಗಾತಿ-ಸರ್ಪ ಸಂಬಂಧ ಮುಂಚೂಣಿಗೆ ಬಂದು ನಿಲ್ಲುತ್ತದೆ. ಹಾಗೆ ಅದರ ಜೊತೆಯಲ್ಲೇ ಬರುವ ಮತ್ತೊಂದು ಕಾದಂಬರಿ ತುಳಸೀದಳ-ತುಳಸೀ.

ಲೇಖಕರು: ರವಿ ಬೆಳೆಗೆರೆ
ಪ್ರಕಾಶಕರು: ಭಾವನ ಪ್ರಕಾಶನ, ಬೆಂಗಳೂರು.


ಪ್ರತಿಗಳಿಗಾಗಿ ಸಂಪರ್ಕಿಸಿ:


 ಸಪ್ನ ಬುಕ್ ಹೌಸ್
ಪುಲಿಯಾನಿ ಬುಕ್ ಹೌಸ್
ಭಾವನ ಪ್ರಕಾಶನ
www.books.yulop.com

No comments:

Post a Comment