Sunday, November 08, 2009

prama



Prama


ಆವತ್ತು  ಆಕೆ ಒಳ್ಳೆಯ ಲಹರಿಯಲ್ಲಿದ್ದಳು. ಅವನು ಸಿಕ್ಕಿದ್ದ. ಸಲೀಂ. ಅವನನ್ನು ಭೇಟಿ ಆದಾಗಲೆಲ್ಲಾ ಮನಸು ಹಕ್ಕಿ ಆಗಿರುತ್ತೆ. ಅದೇ ಲಹರಿಯಲ್ಲಿ ಮನೆಗೆ ಬಂದಳು.


ಅಮ್ಮ ಯಥಾಪ್ರಕಾರ ಅಡುಗೆ ಮನೆಯಲ್ಲಿದ್ದಳು. ಅಪ್ಪ ಹಾಲ್ ನಲ್ಲಿ ಕೂತಿದ್ದರು. ಮುಖ ಗಂಟಿಕ್ಕಿತ್ತು. ಕಣ್ಣು ಕೆಂಪಗಿದ್ದವು. ಈವತ್ತೆನೊ ಮಹಾ ಮಂಗಳಾರತಿ ಕಾದಿದೆ ಅನಿಸಿತು ಅವಳಿಗೆ. ನೇರವಾಗಿ ರೂಮಿಗೆ ಹೋದಳು. ಬಟ್ಟೆ ಬದಲಿಸಿ ಅಡುಗೆ ಮನೆಗೆ ಬಂದಳು.


ಅಮ್ಮನ ಮುಖದಲ್ಲಿ ಕಳವಳವಿತ್ತು. ಏನಾಯ್ತು ಎಂಬಂತೆ ಕಣ್ಣಲ್ಲೆ ಕೇಳಿದಳು. ಅಮ್ಮ ಉತ್ತರಿಸಲಿಲ್ಲ. ಅವಳಿಗೆ ಏನೋ ಜರುಗಲಿದೆ ಎಂದು ಖಾತ್ರಿಯಾಯ್ತು. ಬಹುಶಃ ಅವಳ ಅಣ್ಣನ ಉಪಟಳ ಅಂದುಕೊಂಡಳು. ಅವಳ ಅಣ್ಣ ಶ್ರೀಹರಿ ಚಿಕ್ಕಂದಿನಲ್ಲಿ ಅಪಾರ ಬುದ್ದಿವ೦ತಿಕೆಯ ಹುಡುಗನಾಗಿದ್ದ. ಬ್ರಾಹ್ಮಣ ರ ಬೀದಿಯಲ್ಲಿದ್ದ ಶಾಲೆಗೆ ಹೋಗುತ್ತಿದ್ದ. ಜೊತೆಗೆ ವೇದಾಧ್ಯಯನ ಕೂಡ ಆಗುತ್ತಿತ್ತು. PUC ತನಕ ಎಲ್ಲಾ ಸರಿಯಾಗಿ ಇತ್ತು. ಡಿಗ್ರೀ ಗೆ ಅಂತ ಮಲ್ಲೇಶ್ವರದ ಕಾಲೇಜು ಸೇರುವ ತನಕ. ಎಲ್ಲಾ ಕೆಟ್ಟ ಚಟಗಳು ಅಂಟಿಕೂಂಡವು.ಜೊತೆಗೆ ಗಲಾಟೆಗಳು-ಬೀದಿ ಜಗಳ. ಹೆಚ್ಚು ಕಡಿಮೆ ರೌಡಿಯೇ ಆಗಿದ್ದ. ತುಂಬ ಸಲ ಕಾಲೇಜಿನ principal ಫೋನ್ ಮಾಡಿ ಅವನ ಪ್ರತಾಪಗಳನ್ನು ವರ್ಣಿಸಿದ್ದರು. ಮತ್ತೆ repeat ಆದರೆ ಅವನನ್ನು ಡಿಬಾರ್ ಮಾಡುವುದಾಗಿ ಎಚ್ಚರಿಸಿದ್ದರು. ಅವರು ಹೇಳಿದಂತೆಯೇ ಶ್ರೀಹರಿ ಡಿಬಾರ್ ಕೂಡ ಆದ. ಆವತ್ತು ಮನೆಯಲ್ಲಿ ಕುರುಕ್ಷೇತ್ರವೇ ನಡೆದಿತ್ತು. ದೇವಸ್ಥಾನದ ಅರ್ಚಕರಾದ ಅಪ್ಪ ಭೂಮಿ-ಆಕಾಶ ಒಂದು ಮಾಡಿದ್ದರು. ಕೆಲ ದಿನ ಶ್ರೀಹರಿ ಮನೆ ಬಿಟ್ಟು ಹೋದ. ಆದರೂ ಅವನ ಬಗ್ಗೆ ಆಗಾಗ್ಗೆ ತಿಳಿಯುತ್ತಲಿತ್ತು. ಇವತ್ತು ಕೂಡ ಎನೋ ಘನಂದಾರಿ ಕೆಲಸ ಮಾಡಿದ್ದಾನೆ ಅಣ್ಣ. ಹಾಗಾಗಿ ಅಪ್ಪನ ಕೋಪ ನೆತ್ತಿಗೇರಿದೆ ಅಂತ ಅಂದುಕೂಂಡಳು.


ರುಕ್ಮಿಣಿ ಅಂತ ಕರೆದರು ವೇಣುಗೋಪಾಲಯ್ಯ. ಬೆದರಿದ ಜಿಂಕೆಯಂತೆ ರುಕ್ಮಿಣಿ ಅವರ ಬಳಿಗೆ ಹೋಗಿ ನಿಂತಳು.
ಯಾರದು? ಕಂಚಿಗೆ-ಕಂಚು ತಾಗಿದ ಧ್ವನಿ.
ಯಾರಪ್ಪ? ರುಕ್ಮಿಣಿಯ ಮುಗ್ಧ ಪ್ರಶ್ನೆ..
ನಿನ್ನ ಜೊತೆ ಇದ್ದ ಹುಡುಗ?
ಯಾವ ಹುಡುಗ? ಅದೇ ಮುಗ್ಧತೆಯಲ್ಲೇ ಪ್ರಶ್ನಿಸಿದಳು.
ಏನು ಗೊತ್ತಿಲ್ಲದವಳ ತರಹ ಆಡಬೇಡ. ನೀವಿಬ್ಬರೂ ಆ ರಸ್ತೆ ತುದಿಯಲ್ಲಿ ಕೈ-ಕೈ ಹಿಡಿದುಕೂಂಡು ಬಾರ್ತಾ ಇರಲಿಲ್ಲ? ಗಡುಸಾಗಿತ್ತು ದನಿ.
………………
ಯಾರವನು? ನಿನಗೂ- ಅವನಿಗೂ ಏನು ಸಂಬಂಧ?
ಓ ಅವನಾ? ಸಲೀಂ ಅಂತ. ನನ್ನ classmate. ಅವನ ಮನೆ ಇಲ್ಲೇ ಇರೋದು ದರ್ಗಾದಲ್ಲಿ. ತುಂಬಾ ಒಳ್ಳೆಯ ಹುಡುಗ.ಹಾಗೆ ಮಾತಾಡಿಕೂಂಡು ಬರ್ತಾ ಇದ್ವಿ. ಅವಳು ನಿಜಾನೇ ನುಡಿದಳು.
ವೇಣುಗೋಪಾಲಯ್ಯನ ಸಿಟ್ಟು ತಾರಕಕ್ಕೇರಿತ್ತು. ಛಟೀರ್ ಎಂದು ಕೆನ್ನೆಗೆ ಬಾರಿಸಿದಳು. ರುಕ್ಮಿಣಿ ಇದನ್ನು ನಿರೀಕ್ಷಿಸಿರಲಿಲ್ಲ. ಅಲ್ಲೇ ಕುಸಿದು ಕುಳಿತಳು.
ನಿಂಗೆ ಬೇರೆ ಯಾರು ಸಿಗಲಿಲ್ವಾ ಪ್ರೀತಿ ಮಾಡಕ್ಕೆ? ಮುಸ್ಲಿಂ ಆಗಬೇಕಿತ್ತಾ? ನೋಡ್ದೋರು ಎನಂದ್ಕೋತಾರೆ?
ಅಂದ್ರೆ ಮುಸ್ಲಿಂ ಅಲ್ಲದೇ ಬೇರೆ ಯಾರನ್ನೇ ಪ್ರೀತಿಸಿದ್ರೂ ನೀವು ಒಪ್ತಿದ್ದರಾ? ಅಂತ ಗಡುಸಾಗಿಯೇ ಕೇಳಿದಳು.
ವಿತಂಡ ವಾದ ಮಾಡಬೇಡ.
ನಿನ್ನನ್ನು ಸಾಯಿಸಿಬಿಡ್ತಾನೆ ಅವನು. ಹೋಗಿ ಹೋಗಿ ಮುಸ್ಲಿಂ ಜೊತೆ.. ಛೀ.. ಛೀ.. ಅವನನ್ನು ಮರೆತು ಮರ್ಯಾದೆ ಇಂದ ಇರೋದು ನೋಡು.
ಅವನ್ಯಾಕೆ ನನ್ನ ಸಾಯಿಸ್ತಾನೆ? ಅವನು ನನ್ನ ಪ್ರೀತಿಸ್ತಾನೆ ಅಪ್ಪ. ತುಂಬಾ ಒಳ್ಳೆಯ ಹುಡುಗ. ಎಲ್ಲಾ ಮುಸ್ಲಿಂ ರು ಕೆಟ್ಟವರಲ್ಲ. ಅಷ್ಟೆಲ್ಲಾ ಯಾಕೆ? ಇದೇ ಬೀದಿಯ ರಾಮಾಶಾಸ್ತ್ರಿ ತನ್ನ ಸೊಸೆಯನ್ನೆ ಸೀಮೆ ಎಣ್ಣೆ ಹಾಕಿ  ಸುಡಲಿಲ್ವಾ?
ಅದೆಲ್ಲಾ ಬೇಡ. ನೀನು ಅವನನ್ನ ಮರೆತುಬಿಡು. ಬೇರೆ ಗಂಡು ನೋಡ್ತೀವಿ. ಲೇ ಇವಳೇ, ನೀನಾದರೂ ಬುದ್ಧಿ ಹೇಳು. ಮಗ ನೋಡಿದರೆ ಹಂಗೆ; ಮಗಳು ಹಿಂಗೆ. ನೀನು ಬಂಜೆಯಾಗಿದ್ದರೆ ನಾನು ಖುಶಿ ಪಡ್ತಾ ಇದ್ದೆ.


ಲಕ್ಶಿದೇವಮ್ಮನಿಗೆ ಪಿಚ್ಚೆನಿಸಿತು. ಆಕೆ ಬುದ್ಧಿಹೇಳ ಹೋದರು. ರುಕ್ಮಿಣಿ ಎದ್ದು ಹೋಗಿ ರೂಮು ಸೇರಿಕೂಂಡಳು.
ರುಕ್ಮಿಣಿ ಕೋಪದಿಂದ ಕುದಿಯುತ್ತಿದ್ದಳು. ಅಲ್ಲಾ ನಾನು ಸಲೀಂನ ಇಷ್ಟ ಪಟ್ಟರೆ ಏನು? ಇನ್ನು ಆ ವಿಚಾರದಲ್ಲಿ ನಮ್ಮಿಬ್ಬರಿಲ್ಲೇ ಒಮ್ಮತವಿಲ್ಲ. ಹಾಗೊಂದು ವೇಳೆ ಮದುವೆ ಆಗಲೇ ಬೇಕಾದರೆ ಇನ್ನು ೩ ವರ್ಷ ಇಲ್ಲ ಅಂತ ಸಲೀಂ ಸ್ಪಷ್ಟ ಪಡಿಸಿದ್ದಾನೆ. ಓದೇ ಇನ್ನು ೧ ವರ್ಷ ಆಗುತ್ತೆ. ಆಮೇಲೆ ಕೆಲಸ ಅಂತ ಆಗಬೇಕು. ತದ ನಂತರ ಮದುವೆ. ಮೇಲಾಗಿ ನಮ್ಮ ಮನೆಗಳಲ್ಲಿ ಒಪ್ಪುತ್ತಾರೋ ಇಲ್ವೊ ಅನ್ನೋ ಭಯ ನಮ್ಮಿಬ್ಬರಿಗೂ ಇದೆ. ಅಪ್ಪ ನೋಡಿದರೆ ಈಗಲೇ ಬೈದಾಡುತಾ ಇದ್ದಾರೆ.ಪ್ರತಿ ದಿನ ದೇವರಿಗೆ ಪೂಜೆ ಮಾಡ್ತಾರೆ. ಆ ದೇವರು ಇದೇ ಏನು ಹೇಳಿರೋದು? ಜಾತಿ-ಧರ್ಮ-ದೇವರು ಮಾಡಿದ್ದಲ್ಲ. ನಾವೇ ನಮ್ಮ ಅನುಕೂಲಕ್ಕಾಗಿ ಮಾಡಿಕೂಂಡಿದ್ದು. ನಾವು ಖುಷಿಯಾಗಿ ಇರಲಾರವು ಅಂತಾದರೆ ಈ ಜಾತಿ ಯಾಕೆ?ಹೀಗೆ ಯೋಚಿಸುತ್ತಾ ಅವಳು ನಿದ್ರೆಗೆ ಜಾರಿದ್ದಳು. ರಾತ್ರಿ ಸುಮಾರು ೧ ಘಂಟೆ ಇರಬಹುದು. ಅವಳ ಮೊಬೈಲ್ ಗೆ ಒಂದು message ಬಂದಿತ್ತು. ಅದನ್ನು ಅವಳು ಆಗಲೇ ನೋಡಿದ್ದರೇ ಅವಳು ಮತ್ತೆ ನಿದ್ರಿಸುತ್ತಿರಲಿಲ್ಲ…. ಆದರೆ ಗಾಢ ನಿದ್ದೆಯಲ್ಲಿದ್ದವಳಿಗೆ ಅದು ಗೊತ್ತಾಗಲಿಲ್ಲ.


ಸಲೀಂ ಮೇಲೆ ಹಲ್ಲೆಯಾಗಿತ್ತು.! ಖುದ್ದು ಶ್ರೀಹರಿಯೇ ನಿಂತು ಹಲ್ಲೆ ನಡೆಸಿದ್ದ. ಅವನು ಸತ್ತ ಅಂತ ತಿಳಿದು ಶ್ರೀಹರಿ ಮತ್ತವನ ಜೊತೆಗಾರರು ಪರಾರಿಯಾಗಿದ್ದರು. ಆದರೆ, ಸಲೀಂ ಗಟ್ಟಿಮುಟ್ಟಾದ ಆಳು .ಇದಾದದ್ದು ರಾತ್ರಿ ಸುಮಾರು ೧೧.೩೦ ಘಂಟೆಗೆ.  ಕ್ಶೀಣವಾಗಿ ಉಸಿರಾಡುತ್ತಿದ್ದ ಸಲೀಂ ಅನ್ನು ರಾತ್ರಿ ಬೀಟಿನ ಪೋಲಿಸರು Victoria ಆಸ್ಪತ್ರೆಗೆ ದಾಖಲು ಮಾಡಿದ್ದರು. ತದ ನಂತರ ಮನೆಯವರಿಗೆ ವಿಷಯ ತಿಳಿಸಿದ್ದರು. ಆಸ್ಪತ್ರೆಗೆ ಬಂದ  ಸಲೀಂ ನ ತಮ್ಮ ರಿಜ್ವಾನ್ ರುಕ್ಮಿಣಿಗೆ message ಮಾಡಿದ್ದ, ಸಲೀಂ ಸೆಲ್ ಇಂದ. ಈ ಪ್ರಕರಣದ ಹಿಂದೆ ನಿಮ್ಮಣ್ಣನ ಕೈವಾಡವಿರಬಹುದು ಅಂತ ಸೂಕ್ಶ್ಮವಾಗಿ ಹೇಳಿದ್ದ.
ರುಕ್ಮಿಣಿ ಬೆಳಗ್ಗೆ ಎದ್ದಾಗ ವೇಣುಗೋಪಾಲಯ್ಯನವರ ಶ್ಲೋಕಗಳು ಕೇಳಿಸುತ್ತಿತ್ತು. ಅಪ್ಪ ನಸುಕಿಗೆ ಎದ್ದು ಪ್ರಾತಃವಿಧಿಗಳನ್ನು ಪೂರ್ತಿಗೊಳಿಸಿ, ಸ್ನಾನ ಮಾಡಿ ಪೂಜೆಗೆ ಕೂಡುತ್ತಿದ್ದ. ಲಕ್ಶಿದೇವಮ್ಮ ಕೂಡ ಅವರಿಗೆ ಸಹಾಯ ಮಾಡುತ್ತಿದ್ದರು. ಮುಂಚೆ ಶ್ರೀಹರಿ ಇರುತ್ತಿದ್ದ. ಈಗ ಅವನು ಮನೆಯಲ್ಲಿ ಇರೋದೇ ಅಪರೂಪ. ರುಕ್ಮಿಣಿ ಎದ್ದು ದಿನಂಪ್ರತಿಯಂತೆ ಸೆಲ್ ತೆಗೆದು ನೋಡಿದಳು. ಒಂದು message ಕಾಯುತ್ತಿತ್ತು.ಮುಖವರಳಿತು. Message ಓದಿದಾಗ ಆಘಾತವಾಯ್ತು. ಕಣ್ಣುಜ್ಜಿಕೊಂಡು ಮತ್ತೆ ಓದಿದಳು. ಹೌದು ನಿಜ, ಸಲೀಂ ಆಸ್ಪತ್ರೆಯಲ್ಲಿದ್ದಾನೆ. ಅದಕ್ಕೆ ಕಾರಣ ನಮ್ಮಣ್ಣ ಇರಬಹುದು. ಅವನಿಗೆ ಯಾರು ಹೇಳಿದ್ದು? ಅಪ್ಪ? ಅಥವಾ ಬೇರೆ ಯಾರಾದರೂ? ಒಂದು ಕ್ಶಣ ಗೊಂದಲವಾಯ್ತು. ತಕ್ಶಣ ಆಸ್ಪತ್ರೆಗೆ ಹೋಗೋಣ ಅನ್ನಿಸಿತು. ಆದರೆ ಹೊರಬರಲು ಕೂಡ ಧೈರ್ಯ ಸಾಲಲಿಲ್ಲ. ತಕ್ಶಣ phone ಮಾಡೋಣ ಅಂದುಕೊಂಡಳು.ಮಾಡಲಾಗಲಿಲ್ಲ.  ಬಹುಶಃ ಸಲೀಂ ಎತ್ತಲಾರ. ಅವರ ಮನೆಯವರು ಮಾತಾಡ ಬಹುದು. ಆದರೆ, ರಿಜ್ವಾನ್ ಹೇಳೋ ಪ್ರಕಾರ ನಮ್ಮಣ್ಣನೇ ಇದಕ್ಕೆಲ್ಲಾ ಕಾರಣ. ಹಾಗಾಗಿ ಅವರಿಗೆ ನನ್ನ ಮೇಲೆ ಕೋಪ ಬಂದಿರಲಿಕ್ಕೂ ಸಾಕು. ಪೋಲಿಸ್ ಕೇಸ್ ಆದರೆ ಏನು ಮಾಡೋದು ಅಂತ ಚಿಂತೆಗೊಳಗಾದಳು. ಆದರೆ, ಅವಳಿಗೆ ಗೊತ್ತಿಲ್ಲದ ವಿಷಯ ಅಂದ್ರೆ ಈಗಾಗಲೇ ಮಂಜ ಅನ್ನೋನು approver ಆಗಿದ್ದಾನೆ. ಆತ ಶ್ರೀಹರಿಯ ಸ್ನೇಹಿತ ಮತ್ತು ಈ ಎಲ್ಲಾ ಬೆಳವಣಿಗೆ ಕಾರಣ ದೇವಸ್ಥಾನದ ಅರ್ಚಕ ವೇಣುಗೋಪಾಲಯ್ಯ!! ಆದರೂ ಮನಸು ತಡೆಯಲಿಲ್ಲ. ಆಸ್ಪತ್ರೆಗೆ ಹೋಗೋಣ ಅಂತ ತಯಾರಾದಳು ರುಕ್ಮಿಣಿ.
ನಿಲ್ಲು!! ಕೂಗಿದರೂ ವೇಣುಗೋಪಾಲಯ್ಯ!
ಅಪ್ಪ, ನಾನು ಕಾಲೇಜಿಗೆ ಹೋಗಬೇಕು. ಇವತ್ತು practicles ಇದೆ.
ನಂಗೊತ್ತು ನೀನೆಲ್ಲಿಗೆ ಹೋಗ್ತಾ ಇದೀಯಾ ಅಂತ. Victoria ಆಸ್ಪತ್ರೆಗೆ ಆ ಸಾಬಿನಾ ನೋಡೋಕೆ ಅಲ್ವಾ?!
ರುಕ್ಮಿಣಿ ಸ್ತಂಭೀಭೂತಳಾದಳು. ಈ ವಿಷಯ ಅಪ್ಪನಿಗೆ ಹೇಗೆ ತಿಳಿಯಿತು? ಅಂದ್ರೆ ಇದಕ್ಕೇಲ್ಲಾ ಕಾರಣ ಅಪ್ಪ? ಅವಳಿಗೆ ನಂಬಲಾಗಲಿಲ್ಲ.
ಇನ್ನು ಮೇಲೆ ನೀನು ಅವನ  ಜೊತೆ ಇರಕೂಡದು. ಕೂಡು ನಿನ್ನ mobile. ಅವನನ್ನ ಮರೆತುಬಿಡು.
ಅಪ್ಪ ಎಂದು ಎನೋ ಹೇಳ ಹೋದಳು.
ಹೆಚ್ಚು ಮಾತು ಬೇಡ. ನಿಂಗೆ ಮದುವೆ ಮಾಡ್ತೀವಿ. ಸುಖವಾಗಿ ಇರ್ತೀಯ. ಅಲ್ಲೀ ತನಕ ಮನೆಯಲ್ಲೇ ಬಿದ್ದಿರು. ಈವತ್ತಿನಿಂದ ನೀನು ಕಾಲೇಜಿಗೆ ಹೋಗೋದು ಬೇಡ. ರುಕ್ಮಿಣಿಗೆ ಕಾಲ ಕೆಳಗಿನ ಭೂಮಿ ಬಾಯ್ತೆರದಂತಾಯ್ತು.


ಆ ಬ್ರಾಹ್ಮಣರ ಹುಡುಗಿ ಯಾರು? ಪಾಶಾ ಕೇಳಿದ್ದರು.
ರಿಜ್ವಾನ್ ಏನು ಗೊತ್ತಿಲ್ಲದವನ ತರಹ ನಿಂತಿದ್ದ.
ನೋಡು, ರಿಜ್ವಾನ್ ಇದು ನಮ್ಮ ಮಗನ ಜೀವನದ ಪ್ರಶ್ನೆ. ಇವರಿಬ್ಬರದೂ ಪ್ರೀತಿ-ಗೀತಿ ಅಂತೇನೂ ಇಲ್ಲವಲ್ಲಾ? ರಿಜ್ವಾನ್ ದು ದಿವ್ಯ ಮೌನ.
ಬದ್ಮಾಶ್….. ನಿಂಗೊತ್ತು. ಹೇಳು ಅಂತ ಕೆನ್ನೆಗೆ ಛಟೀರ್ ಅಂತ ಬಿತ್ತು ಏಟು. ಇಡೀ ಆಸ್ಪತ್ರೆಯಲ್ಲಿ ಅದು ಮಾರ್ದನಿಸಿತ್ತು. ರಿಜ್ವಾನ್ ಕುಸಿದು ಬಿದ್ದ.
ತಾಯಿಯಿಲ್ಲದ ತಬ್ಬಲಿಗಳು ಅಂತ ಇಬ್ಬರನ್ನೂ ಪ್ರೀತಿಯಿಂದ ನೋಡಿಕೂಂಡರೆ ಏನಿದು ನಿಮ್ಮ ಕೆಲಸ?
ಅಬ್ಬಾಜಾನ್, ರಿಜ್ವಾನ್ ಬಾಯಿಬಿಟ್ಟ. ಸಲೀಂ ಮತ್ತು ರುಕ್ಮಿಣಿ ತುಂಬಾ ಪ್ರೀತಿಸ್ತಾರೆ. ಆದರೆ, ಅವರಿಗೆ ಈ ಬಗ್ಗೆ ಗೊಂದಲವಿದೆ. ಹಿಂದೂ-ಮುಸ್ಲಿಂ ಪ್ರೀತಿಯನ್ನು ಈ ಸಮಾಜ- ನೀವು ಒಪ್ತೀರೋ ಇಲ್ವೋ ಅಂತ. ಬಹುಶಃ ಈ ಬಗ್ಗೆ ಅವರ ಮನೆಯಲ್ಲಿ ಚರ್ಚೆ ಆಗಿರಬಹುದು. ಅವರಿಗೆ ಇಷ್ಟವಾಗಿಲ್ಲ. ಈ ಹಲ್ಲೆ ನಡೆದಿದೆ. ಅದಾಗಿ ಒಬ್ಬ approver ಆಗಿದ್ದಾನೆ. ಆದರೆ ಅಬ್ಬಾಜಾನ್, ರುಕ್ಮಿಣಿ ತುಂಬಾ ಒಳ್ಳೆಯ ಹುಡುಗಿ. ನಿಧಾನವಾಗಿ ವಿವರಿಸಿದ ರಿಜ್ವಾನ್.
ಪಾಶಾ ಯೋಚನೆಗೆ ಬಿದ್ದರು. ಈ ಪರಿಸ್ಥಿತಿಯಲ್ಲಿ ಏನು ಮಾಡಬಹುದು? ಆ ಹುಡುಗಿ ಇಸ್ಲಾಂಗೆ ಮತಾಂತರಗೊಂಡರೆ? ಅವರೂ ಹೀಗೆ ಕೇಳಬಹುದು. ಇಷ್ಟಕ್ಕೂ ಸಲೀಂ ಇದಕ್ಕೆಲ್ಲಾ ಒಪ್ಪುತ್ತಾನಾ? ಚಿಕ್ಕಂದಿನಿಂದ ಜಾತಿ-ಧರ್ಮದ ಬಗ್ಗೆ ಸಲೀಂಗೆ ಅವನದೇ ಆದ ಅಭಿಪ್ರಾಯಗಳಿವೆ. ಎಷ್ಟೋ ಬಾರಿ ತಾವು ಅವನ ತರ್ಕಕ್ಕೆ ಒಪ್ಪಿದ್ದಾರೆ. ಹೀಗೆ ಸಾಗಿತ್ತು ಅವರ ವಿಚಾರಧಾರೆ.




ನೋಡು ರುಕ್ಮಿಣಿ, ಶ್ರೀಹರಿ ತುಂಬಾ ದಿನವಾದ ಮೇಲೆ ಅವಳ ಜೊತೆ ಮಾತಾಡಿದ್ದ. ಆ ಸಾಬಿ ಸಹವಾಸ ಬಿಡು. ಈಗಾಗಲೇ ಅವನ ಮೇಲೆ ಹಲ್ಲೆ ಆಗಿ ಅದು ಪೋಲಿಸ್ ತನಕ ಹೋಗಿ ನಮ್ಮ ಹುಡುಗ approver ಆಗಿದ್ದಾನೆ. ಅವನು ಮೇಲೆದ್ದು ಓಡಾಡಲು ಕನಿಷ್ಠ ಮೂರು ತಿಂಗಳಾದರೂ ಬೇಕು. ಇಷ್ಟಾದ ಮೇಲೆ ನೀನು ಅವನ್ನನ್ನೇ ಮದುವೆ ಆಗ್ತೀನಿ ಅಂತ ಅಂದ್ರೆ ಅವರು ನಿನ್ನ ಸಾಯಿಸಿಬಿಡ್ತಾರೆ.
ಅದಕ್ಕೆ ಕಾರಣ ನೀವು… ಚೂಪಾಗಿತ್ತು ದನಿ.
ನೋಡು, ಅರ್ಥ ಮಾಡ್ಕೋ. ಇತ್ತೀಚಿಗೆ ಈ ಮುಸ್ಲಿಂ ಹುಡುಗರ ದಂಧೆ ಇದು. ಚೆನ್ನಾಗಿರೋ ಹಿಂದೂ ಹುಡುಗೀರನ್ನ ಪ್ರೀತಿಸಿ ಅವರನ್ನು ಇಸ್ಲಾಂಗೆ ಮತಾಂತರಗೊಳಿಸಿ ನಂತರ ಆ ಹುಡುಗೀರನ್ನ ಸಾಯಿಸೋದು. ಅವನು ಇನ್ನ ಓದ್ತಾ ಇದ್ದಾನೆ. ಕೈಯಲ್ಲಿ ಕಾಸಿಲ್ಲ. ನಿನ್ನ maintain ಮಾಡಕ್ಕೆ ದುಡ್ಡು ಬೇಕು. ಅವನೊಬ್ಬ fraud.ಅವನ ಜೊತೆ ನೀನೇನು ಸುಖಪಡ್ತೀಯಾ?
ತಕ್ಶಣಕ್ಕೆ ಏನು ಹೇಳಬೇಕೆಂದು ರುಕ್ಮಿಣಿಗೆ ತೋಚಲಿಲ್ಲ.
ರುಕ್ಕು, ಶ್ರೀಹರಿ ಮುಂದುವರಿಸಿದ. ನೀನಿನ್ನ ಚಿಕ್ಕವಳು. ನೀನೇನು ಯೋಚನೆ ಮಾಡಬೇಡ. ನಿಂಗೆ ಬೇರೆ ಕಡೆ ಸಂಬಂಧ ನೋಡ್ತಾ ಇದೀವಿ. ಒಳ್ಳೆಯ ವರ ಸಿಕ್ಕ ತಕ್ಶಣ ನಿನ್ನ ಮದುವೆ. ಅಲ್ಲೀ ತನಕ ಸುಮ್ನೆ ಇರು. ಇದು ಮನೆ ಮರ್ಯಾದೆ ಪ್ರಶ್ನೆ.
ರುಕ್ಮಿಣಿಗೆ ಸಂಕಟ. ಈ ಸಂದಿಗ್ಧ ಪರಿಸ್ಥಿತಿ ಎದುರಿಸಲು ಧೈರ್ಯ ಕೂಡು ಕ್ರಿಷ್ಣ ಅಂತ ದೇವರ ಮೊರೆ ಹೊಕ್ಕಳು.
ಇದಾಗಿ ಒಂದು ವಾರದೊಳಗೆ ರುಕ್ಮಿಣಿಯ ಮದುವೆ ತರಾತುರಿಯಲ್ಲಿ ನಡೆದು ಹೋಯ್ತು. ಸಲೀಂ ಆಸ್ಪತ್ರೆಯಲ್ಲೇ ಇದ್ದ. ದೊಡ್ಡದೊಂದು ಭಾರ ಇಳಿದಂತೆ ವೇಣುಗೋಪಾಲಯ್ಯ ನಿಶ್ಚಿಂತರಾದರು. ಈ ಎಲ್ಲಾದರ ನಡುವೆ ರುಕ್ಮಿಣಿಯ ಕಣ್ಣೀರು ಯಾರಿಗೂ ಕಾಣಲಿಲ್ಲ.


ಮದುವೆಯಾಗಿ ಹೊಸದಾಗಿ ಬದುಕು ಪ್ರಾರಂಭಿಸಿದ ರುಕ್ಮಿಣಿ ಅದೊಂದು ದಿನ ಬೆಳಗ್ಗಿನ ಸುದ್ದಿ ನೋಡಿ ಮೂರ್ಛೆ ಹೋದಳು. ಆ ಸುದ್ದಿ ಹೀಗಿತ್ತು: ಉಗ್ರರ ಗುಂಪೊಂದು ಬೆಂಗಳೂರಿನ ದೇವಾಸ್ಥಾನಕ್ಕೆ ಬಾಂಬ್ ಇಟ್ಟು ಉಡಾಯಿಸಿದ್ದರು. ಈ ಘಟನೆಯಲ್ಲಿ ಸುಮಾರು ೧೫ ಮಂದಿ ಸ್ಥಳದಲ್ಲೇ ಅಸು ನೀಗಿದ್ದರು. ಸತ್ತವರ ಪಟ್ಟಿ ಹೀಗಿದೆ:
ಪ್ರಧಾನ ಅರ್ಚಕ ವೇಣುಗೋಪಾಲಯ್ಯ
ಮಮತಾ
ನೀರಜಾ
ರಮೇಶ್
………………..



No comments:

Post a Comment