Friday, April 16, 2010
Saturday, February 06, 2010
Kannada Pustaka
ಹೀಗೊಂದು ಬ್ಲಾಗ್ ಇದೆ. ಇದರಲ್ಲಿ ಶ್ರೀಯುತ ಡಾ. ಜೆ. ಬಾಲಕೃಷ್ಣ ರವರು ತಮ್ಮ ಕೃತಿಗಳನ್ನು ಉಚಿತವಾಗಿ download ಮಾಡಿಕೊಳ್ಳಲು ಅವಕಾಶವನ್ನಿತ್ತಿದ್ದಾರೆ. ಇವರ ಪುಸ್ತಕಗಳು ಆಸಕ್ತಿ ಕೆರೆಳಿಸುವಂತಿದೆ.
http://kannadapustaka.blogspot.com/
Just ಮಾತ್
ಮಾತಲ್ಲಿ
Just ಮಾತ್ ಮಾತಲ್ಲಿTechnically ತುಂಬಾ brilliant ಆಗಿದೆ.
ಹಾಡುಗಳು
ಪ್ಲಸ್ ಪಾಯಿಂಟ್.
Re-recording
ಅದ್ಭತವಾಗಿ ಮೂಡಿ ಬಂದಿದೆ.
ರಾಮ್ ಗೋಪಾಲ್ ವರ್ಮ Factory ಇಂದ ತುಂಬಾ ಕಲಿತಿದ್ದಾರೆ
ನಿರ್ದೇಶಕರು.
Camera
angles; ನೆರಳು-ಬೆಳಕಿನ ಸಂಯೋಜನೆ apt ಆಗಿದೆ.
ಸಿನೆಮಾ
ಶುರುವಿನಲ್ಲಿ ರಾಜೇಶ್(ಆದಿ) ತುಂಬಾ ಕಾಟ ಕೊಡ್ತಾರೆ. ಅದು ನಿರ್ದೇಶಕರ ಗೆಲವು.
ಚಿತ್ರದ
Marketing ನವ-ನವೀನ.
ಚಿತ್ರದ
heroಗಳು ಅಂದರೆ- ನಿರ್ದೇಶಕ
ನಾಯಕ ಸಿದ್ಧಾರ್ಥ್
ರಘು ದೀಕ್ಷಿತ್(ಸಂಗೀತ)
ಶ್ರೀವೆಂಕಟ್(ಛಾಯಾಗ್ರಹಣ)
ರೋಹಿತ್(ಚಿತ್ರಕತೆ-ಸಂಭಾಷಣೆ)
ಅರುಣ್ ಸಾಗರ್(ಕಲೆ)
ತೀರಾ
simple ಕಥೆಯನ್ನು ನಿರ್ದೇಶಕರು ಅದ್ಭುತವಾಗಿ present ಮಾಡಿದ್ದಾರೆ.
ಇದು
ನಮ್ಮ ನಡುವೆಯೇ ನಡೆಯುವ ಕಥೆ. ನಾಯಕ ಸಿದ್ಧಾರ್ಥ್ ಜೊತೆ ನಾವು ನಮ್ಮನ್ನ identify ಮಾಡ್ಕೋತೀವಿ.
ಪಟ್-ಪಟ್
ಅಂತ ಅರಳು ಹುರಿದಂತೆ ಮಾತಾಡುವ ನಾಯಕಿ ತನು ಇಷ್ಟವಾಗ್ತಾಳೆ.
ಕೆಲವೊಂದು
ಕಡೆ melodrama ಅಂತ ಅನ್ನಿಸಿದರೂ, no complaints.
Just ಮಾತ್ ಮಾತಲ್ಲಿ ಎಲ್ಲಾ ಹೇಳಲಾಗದು. ಕೆಲವೊಂದು ಭಾವನೆಗಳಿಗೆ
ಮಾತಿಲ್ಲ. ಮೌನವೇ ಸೂಕ್ತ. ಇದನ್ನು ಅತ್ಯಂತ ಶ್ರದ್ಧೆಯಿಂದ ಬಹಳ ತೀವ್ರವಾಗಿ ತೆರೆ ಮೇಲೆ ತಂದಿದ್ದಾರೆ
ನಿರ್ದೇಶಕರು.
ರಘು
ದೀಕ್ಷಿತ್ ಮತ್ತೊಮ್ಮೆ ಮಿಂಚಿದ್ದಾರೆ. ಹಾಡುಗಳು, re-recording ನವ್ಯ. ಹಾಡಿನ ಸಾಹಿತ್ಯದಲ್ಲೂ ತಮ್ಮ
ಪ್ರತಿಭೆ ತೋರಿದ್ದಾರೆ.
ಈ ಚಿತ್ರದ ಸಂಗೀತದ
ಬಗ್ಗೆ ಅವಶ್ಯವಾಗಿ ಹೇಳಲೇಬೇಕಾದ ಮುಖ್ಯವಾದ ಸಂಗತಿ ಅಂದ್ರೆ ಈ ಚಿತ್ರದಲ್ಲಿ ಕನ್ನಡದ ಗಾಯಕರು ದನಿ
ನೀಡಿದ್ದಾರೆ. ಕನ್ನಡ ಚಿತ್ರ ಗೀತೆಗಳು ಸೋನು ನಿಗಮ್ ರ ಅಸ್ಪಷ್ಟ ಉಚ್ಚಾರದಿಂದ ಅಸಹ್ಯ ಹುಟ್ಟಿಸುವಷ್ಟು
ಬಾಡಿ ಹೋಗಿತ್ತು.
Just ಮಾತ್ ಮಾತಲ್ಲಿ ಗೀತ ಸಾಹಿತ್ಯ-ಸಂಗೀತ ಹೊಸದೊಂದು
ಅಲೆ ಸೃಷ್ಠಿಸಿದೆ ಅಂದರೆ ತಪ್ಪಾಗಲಾರದು. ಶ್ರೀಯುತ
ಹಂಸಲೇಖಾ ಹೇಳುವಂತೆ ರಘು ದೀಕ್ಷಿತ್ trend-setter. ಎಲ್ಲಾ ಹಾಡುಗಳು ಅದ್ಭುತ ಸೃಷ್ಠಿ. ಅದರಲ್ಲೂ
ಮುಂಜಾನೆ ಮಂಜಲ್ಲೂ ಹಾಡು ಎದೆಯ ನವಿರಾದ ಭಾವನೆಗಳನ್ನು-ಹಳೆಯ ಪ್ರೇಮದ ನೆನಪುಗಳನ್ನು ನೆನಪಿಸುತ್ತೆ-
ಹೀಗೆ just ಮಾತ್ ಮಾತಲ್ಲಿ……..
ಈ ಚಿತ್ರ
ಖಚಿತವಾಗಿ ಎಲ್ಲಾರಿಗೂ ಇಷ್ಟವಾಗಲಾರದು. ಸುದೀಪ್ ಅಭಿಮಾನಿಗಳಿಗೆ ನಿರಾಶೆ ಆಗಬಹುದು.
ಆದರೆ,
at the end of the day, ಸುದೀಪ್ ನಿರ್ದೇಶಕನಾಗಿ ಗೆಲ್ತಾರೆ. ನಟನಾಗಿ ಗೆಲ್ತಾರೆ. ಚಿತ್ರಕತೆಯಲ್ಲಿ
ಗೆಲ್ತಾರೆ. ಪ್ರತಿಯೊಂದು frame ಅನ್ನು ತುಂಬಾ ಇಷ್ಟಪಟ್ಟು ಮಾಡಿದ್ದಾರೆ.
Tuesday, February 02, 2010
ಪುಟ್ಟಕ್ಕನ ಮೆಡಿಕಲ್ ಕಾಲೇಜು
ಈ ಕಥೆ ಸುಮಾರು ಎರಡು ದಶಕಗಳಷ್ಟು ಹಳೆಯದು. ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತ. ಲೇಖಕರೇ ಹೇಳುವಂತೆ ಕಥೆ
ಕಾಲಾತೀತವಾಗಿರಬೇಕು. ಹಾಗಿದ್ದರೆ ಅವು ಚಿರಾಯು.
ಇವತ್ತಿನ ಸಮಾಜದ ನಿಜ ಸ್ವರೂಪ ಈ ಕಥೆಯಲ್ಲಿ ಚಿತ್ರಿತವಾಗಿದೆ. ಇಂದು ರೈತ ಅತಂತ್ರವಾಗಿದ್ದಾನೆ. ಆತ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ. ಕಷ್ಟ ಪಟ್ಟು ದುಡಿದು ಅದರ ಫಲ ತಿಂದುಂಡು ಸುಖವಾಗಿರುವ ಮನಃಸ್ಥಿತಿಯಲ್ಲಿ ಇವತ್ತು ರೈತನಿಲ್ಲ. ಆತನಿಗೆ ತನ್ನ ಜಮೀನು ಮಾರುವ ಉಮೇದು. ಸರಿಯಾದ ಬೆಲೆ ಸಿಗದೆ ಅದನ್ನು ಬಿಸಾಡುವ ಬದಲು ತನ್ನ ಜಮೀನನ್ನು ಮಾರಿ ಅದರಿಂದ ಬರುವ “ಖಚಿತ ಧನ”ಕ್ಕಾಗಿ ಆಸೆ ಪಡ್ತಾನೆ. ಚಿನ್ನದ ಮೊಟ್ಟೆ ಇಡುವ ಕೋಳಿ ಕಥೆಯಂತೆ. ರೈತ ತನ್ನ ಬೆಳೆಗೆ ತಕ್ಕ ಬೆಲೆ ನಿಗದಿ ಪಡಿಸೋದಿಲ್ಲ. ಇದನ್ನು ಮಧ್ಯವರ್ತಿಗಳು ಅದ್ಭುತವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದೇ ಆಶಯವನ್ನಿಟ್ಟುಕೊಂಡು ಲೇಖಕರು ತಮ್ಮ ಚಿತ್ರ “ಮಾತಾಡ್ ಮಾತಾಡು ಮಲ್ಲಿಗೆ” ಯಲ್ಲಿ ತೆರೆಗೆ ತಂದಿದ್ದಾರೆ.
ಈ ಕಥೆಯಲ್ಲಿ ನಮ್ಮ ಕಥಾನಾಯಕಿ ಪುಟ್ಟಕ್ಕ ಅಸಾಹಯಕ ಹೆಣ್ಣು(ರೈತ). ಆಕೆಗೊಂದಿಷ್ಟು ಜಮೀನಿದೆ. ಅದೂ ಹೈವೆ ರಸ್ತೆಯ ಬಳಿ.ಇಲ್ಲಿ ಪುಟ್ಟಕ್ಕ ಶೋಷಿತ ಮಹಿಳೆಯರ ಪ್ರತಿನಿಧಿಯಂತೆ ಕಾಣುತ್ತಾಳೆ. ಅದೇ ಪಾತ್ರಕ್ಕೆ ಪುರುಷ ಆಯಾಮ ಹಚ್ಚಿ ……….ಮಲ್ಲಿಗೆಯಾಗಿಸಿದ್ದಾರೆ ಲೇಖಕರು.
ಆಕೆಯ ಜಮೀನನ್ನು ಕಬಳಿಸಿ ಅಲ್ಲೊಂದು ಮೆಡಿಕಲ್ ಕಾಲೇಜು ಕಟ್ಟುವ ಮಹತ್ವಾಕಾಂಕ್ಷಿ ಅಲ್ಲಿಯ ಸ್ವಾಮಿಗಳದು. ಸ್ವಾಮಿಗಳು-ಮಠಗಳು ದೇವರ-ಜಾತಿಯ ಹೆಸರಲ್ಲಿ ಮಾಡುತ್ತಿರುವ-ಮಾಡುವ ಅನ್ಯಾಯ ಅಕ್ರಮಗಳು ಕಾಲಾತೀತ. ತನ್ನ ಜಮೀನನ್ನು ಉಳಿಸಿಕೊಳ್ಳಲು ಪಡಬಾರದ ಪಾಡು ಪಡುವ ಅನಕ್ಷರಸ್ಥೆ ಪುಟ್ಟಕ್ಕ ಕೊನೆಗೂ ವಿಫಲಳಾಗುತ್ತಾಳೆ. ಅವಳ ಜಮೀನನ್ನು ಕಬ್ಜಾ ಮಾಡಿ ಅಲ್ಲೊಂದು “ಕಟ್ಟಡ” ನಿರ್ಮಿಸಿ ಅದಕ್ಕೆ “ಕಾಲೇಜು” ಎಂದು ನಾಮಕರಣ ಮಾಡುಲು ಘನ ಮುಖ್ಯಮಂತ್ರಿಗಳನ್ನು ನಮ್ಮ ಸ್ವಾಮೀಜಿ ಆಹ್ವಾನಿಸುತ್ತಾರೆ.
ಇವತ್ತಿನ ವಾಸ್ತವಕ್ಕೆ ಕನ್ನಡಿಯಾಗಿ ಈ ಕತೆ ನಿಲ್ಲುತ್ತದೆ. ಎಲ್ಲಾ ಕಾಲಕ್ಕೂ ಸಲ್ಲುವಂತ ಕಥೆಯಾಗಿ ಹೊರ ಹೊಮ್ಮುತ್ತದೆ.
ಈ ಕಥೆ “ಸನ್ನಿಧಿ” ಕಥಾ ಸಂಕಲನದ್ದು. ಅದು ಅಭಿವ್ಯಕ್ತಿಯ ಮೂಲಕ ಮತ್ತೊಮ್ಮೆ ಪ್ರಕಟವಾಗಿದೆ.
ಪ್ರಥಮ ಮುದ್ರಣ:1990
ಮತ್ತೆ ಪ್ರಕಾಶಿಸಿದ್ದು:2009
ಲೇಖಕರು: ನಾಗತಿಹಳ್ಳಿ ಚಂದ್ರಶೇಖರ
Wednesday, January 13, 2010
We Donate Blood
Dear Friends,
Greetings for the day.
Donating “blood” is the greatest help rendered to the mankind till date. There’s no other alternative found by advance sciences for blood. Blood can only be replaced by blood. I’m in the process of creating a database of donors so that this will be helpful to the needy.
Kindly send in your details
Name:
Date of Birth:
Blood Group:
Contact Number:
Location:
Also, spread this message amongst your network/company.
Come join hands to the noble cause.
Donate Blood; Save Lives
You can contact me @
abhijithkshyam@gmail.com
9739274590
Thursday, December 31, 2009
ಸಿ. ಅಶ್ವತ್ಥ:: ಒಂದು ಭಾವಪೂರ್ಣ ಶ್ರದ್ಧಾಂಜಲಿ
ಲೇ:ಅನು
ಸಂ:ಅಭಿ
ಸಿ. ಅಶ್ವತ್ಥ:: ಒಂದು ಭಾವಪೂರ್ಣ ಶ್ರದ್ಧಾಂಜಲಿ
“ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ…….” ಪ್ರೇಮದ ಅನುಭವ ಇಲ್ಲದವರಿಗೂ ಈ ಅದ್ಭುತ ಲೋಕದ ಪ್ರಯಾಣ ಮಾಡಿಸುವ ಹಾಡು; ಆ ಪ್ರೇಮ ಸಮುದ್ರದ ದರ್ಶನ ಮಾಡಿಸುವ ಆ ದನಿ ನೀಲಾಕಾಶ ಮೀರಿ ಅನುರಣಿಸುತ್ತಲೇ ಇರುತ್ತದೆ. “ಅಲೆಯಿಡುವ ಮುತ್ತಿನಲೇ ಕಾಣುವುದು ನಿನ್ನೊಲುಮೆ……” ದೇವ ಮಂದಿರದಂತೆ ಪ್ರೀತಿಯಿಂದ ಪುನೀತವಾಗಿದೆ ಮನಸಿನೊಳಗೂ. ಎಷ್ಟು ಸಹಜ ದನಿಯಲ್ಲಿ ಹೇಳಿ ಬಿಡುತ್ತಾರೆ.
ದೂರದ ಊರಿನಲ್ಲೇ ಉಳಿದ ಪತಿಯ ನೆನಪಿನಲ್ಲಿ, ತವರ ಸಂಭ್ರಮದಲ್ಲಿ ಇದ್ದೂ ಇರಲಾರದ ತುಮುಲದ ಚಿತ್ರ “ಬಳೆಗಾರ ಚೆನ್ನಯ್ಯ” ನದು. ಮಾಂತ್ರಿಕ ಧ್ವನಿಯಲ್ಲಿ “ಮುನಿಸು ಮಾವನ ಮೇಲೆ; ಮಗಳೇನ ಮಾಡಿದಳು” ಎಂದು ಘಟ್ಟಿಸಿ ಕೇಳಿದಾಗ ಯಾವ ಪತಿರಾಯನಿಗೂ ಕೋಪ ಅಳಿದು ಹೋಗಬೇಕು.
ಏನೆಲ್ಲಾ ಕಷ್ಟ-ಕೋಟಲೆ ಇದ್ದರೂನೂ ಸೂರ್ಯ ಹುಟ್ಟಿ ಬರುವ ಭರವಸೆ ನಮಗಿತ್ತು. “ಕೋಡಗನ ಕೋಳಿ ನುಂಗಿತ್ತಾ….” “ತರವಲ್ಲ ತಗಿ ನಿನ್ನ ತಂಬೂರಿ…” “ಸೋರುತಿಹುದು ಮನೆಯ ಮಾಳಿಗೆ…” ಎನ್ನುತ್ತಾ ತತ್ವಗಳನ್ನು ಕೇಳಿಸುತ್ತಿದ್ದ ಅಮೋಘ ಧ್ವನಿ ನಿತ್ಯ ನೂತನ- ನಿತ್ಯ ನಿರಂತರ ಎಂದು ನೆಮ್ಮದಿಯಲ್ಲೇ ಇದ್ದು ಬಿಟ್ಟವಲ್ಲ? ಆ ಧ್ವನಿ ಮುಂದೊಮ್ಮೆ ನೀರವವಾಗಬಹುದೆಂಬ ಯೋಚನೆಯೂ ಇಲ್ಲದಂತೆ.
“ಬಾ ಇಲ್ಲಿ ಸಂಭವಿಸು!” ಎಂತಹ ಹಾಡು!! ಎಂತಹ ಬೇಡಿಕೆ….. ಸಿ. ಅಶ್ವತ್ಥ್ ಮತ್ತೆ ಮತ್ತೆ ಇಲ್ಲಿ ಆವಿರ್ಭಾವಿಸಬೇಕು. ತುಂಬು ಜೀವನ ನಡೆಸಿದ ಆ ಚೇತನದ ಸ್ವರ ಗಂಗೆ ನಮ್ಮ ಮನ-ಮನೆಗಳನ್ನು ಆರ್ದ್ರವಾಗಿಸಬೇಕು.
Saturday, December 19, 2009
ಚಿತ್ರ ವಿಮರ್ಶೆ: ಕಳ್ಳರ ಸಂತೆ
ಚಿತ್ರ ವಿಮರ್ಶೆ: ಕಳ್ಳರ ಸಂತೆ
ಈ ವಾರ ತೆರೆಕಂಡಿರುವ ಅಗ್ನಿಶ್ರೀಧರ್ ರವರ ’ ಕಳ್ಳರ ಸಂತೆ’ ಅದು ಹುಟ್ಟು ಹಾಕಿದ ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಸಿ ಮಾಡಿವೆ. ಮೊದಲೆರಡು ಚಿತ್ರಗಳಲ್ಲಿದ್ದ ಮೊನಚು ಕಳೆದು ಹೋಗಿದೆ. ’ಆ ದಿನಗಳು’ ಮತ್ತು ’ಸ್ಲಂ ಬಾಲ’ ಚಿತ್ರಗಳು ನೈಜ ಘಟನೆಗಳ ಆಧಾರಿತ ಕೃತಿಗಳು. ಆದರೆ ’ ಕಳ್ಳರ ಸಂತೆ’ ಯಲ್ಲಿ ನೈಜತೆ ಮಾಯವಾಗಿ ಕಾಲ್ಪನಿಕ ಚಿತ್ರವಾಗಿ ಹಾಸ್ಯಾಸ್ಪದವಾಗಿದೆ.
ಚಿತ್ರದ ಆರಂಭದ ದೃಶ್ಯದಲ್ಲಿ ನಮ್ಮ ನಾಯಕನನ್ನು ಪೋಲಿಸರು chase ಮಾಡುತ್ತಾರೆ. ಆತ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ಈ ನಡುವೆ ಒಬ್ಬ ದಾರಿಹೋಕ ಟಿವಿ ಚಾನೆಲ್ ಒಂದಕ್ಕೆ ಸುದ್ದಿ ಕೊಡುತ್ತಾನೆ. ತದ ನಂತರ flashbackನಲ್ಲಿ ಕತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಮ್ಮ ನಾಯಕ ಕನ್ನಡ ಪದವೀಧರ. ಕೆಲಸ ಸಿಗೋದಿಲ್ಲ. ಸರ್ಕಾರಿ ನೌಕರಿಯಲ್ಲಿ “ಲಂಚಾವತಾರ” ದ ದರ್ಶನವಾಗುತ್ತದೆ. ಬಹುರಾಷ್ಟ್ರೀಯ ಕಂಪನಿಗಳು ಕ್ಯಾರೆ ಅನ್ನುವುದಿಲ್ಲ . ಆತ ಒಂದು ಸಣ್ಣ ಕ್ಯಾಂಟೀನ್ ಪ್ರಾರಂಭಿಸುತ್ತಾನೆ ಲೋಕಲ್ ಎಮ್ ಎಲ್ ಎ ಇಂದ ಕಿರುಕಳ ಅನುಭವಿಸುತ್ತಾನೆ.ಕ್ಯಾಂಟೀನ್ ಸುಟ್ಟುಹೋಗುತ್ತದೆ.ಕೊನೆಗೆ ಅವನು ಕಳ್ಳತನಕ್ಕೆ ಇಳಿಯುತ್ತಾನೆ.ಇವನಲ್ಲಿ ಸೂಕ್ಷ್ಮ ಸಂವೇದನೆಯನ್ನು ಹುಡುಕಿ ಆರೋಪಿಸಿದ್ದಾರೆ ನಿರ್ದೇಶಕರು. ಇಂತಹ ಸೂಕ್ಷ್ಮ ಸಂವೇದನೆಯು ನಮ್ಮ ಘನ ಸರ್ಕಾರವನ್ನು ಉರುಳಿಸುವುದರಲ್ಲಿ ಸಫಲವಾಗುತ್ತದೆ??
ಇಲ್ಲಿನ ಪ್ರಸಂಗಗಳು ಹಾಸ್ಯಾಸ್ಪದವಾಗಿದೆ. ಕೋಟ್ಯಾಂತರ ರೂಪಾಯಿಗಳ ಏರುಪೇರಿನಿಂದಲೇ ಸರ್ಕಾರ ಉರುಳಿಸಲು ಸಾಧ್ಯವಿಲ್ಲ ಆದರೂ ನಮ್ಮ ಸೂಕ್ಷ್ಮ ಸಂವೇದನೆಯ ನಾಯಕ ಅದರಲ್ಲಿ ಯಶಸ್ವಿ! !
ಇಲ್ಲಿ ಪ್ರಸ್ತುತ ವಿದ್ಯಮಾನಗಳನ್ನೆಲ್ಲ ಒಂದೇ ಕಡೆ ತೋರಿಸುವ ಪ್ರಯತ್ನವಾಗಿದೆ . ಅದರಲ್ಲಿ ಶ್ರೀಧರ್ ಎಡವಿದ್ದಾರೆ. ಕನ್ನಡ ಭಾಷಾಪ್ರೇಮ ಅತಿಯಾಗಿದೆ. ಕನ್ನಡ ಮಾತನಾಡುವುದರಿಂದ ಅಸ್ತಮಾ ಕಾಯಿಲೆ ಗುಣವಾಗುತ್ತದೆ ಎನ್ನುವ ಠರಾವಿನ ತನಕ. ಹಾಗಿದ್ದರೆ ಕನ್ನಡಿಗರಿಗೆ ಯಾರಿಗೂ ಅಸ್ತಮಾ ಇರಲೇಬಾರದಿತ್ತಲ್ಲವೆ…..
ಎಲ್ಲ ಬುದ್ದಿಜೀವಿಗಳ , ರಾಜಕಾರಣಿಗಳ ಗೋಸುಂಬೆ ಬಣ್ಣ ಬಯಲು ಮಾಡುತ್ತಾ ಆವೇಶದಲ್ಲಿ ಹಾಸ್ಯಾಸ್ಪದ ದೃಶ್ಯ ಸಂಯೋಜನೆಯಿಂದ ಚಿತ್ರ ನೀಟಾಗಿ ಎಡವುತ್ತದೆ. ನಾಯಕ ಯಶ್ ,ನಾಯಕಿ ಹರಿಪ್ರಿಯಾ ಚೆನ್ನಾಗಿ ಅಭಿನಯಿಸಿದ್ದಾರೆ ಮುಂದೆ ಭರವಸೆಯ ಕಲಾವಿದರಾಗುತ್ತಾರೆಂದು ಸಂತೋಷ ಪಡೋಣ. ರಂಗಾಯಣ ರಘು ತಮ್ಮ ಎಂದಿನ ಶೈಲಿಯಲ್ಲಿ ಪಾತ್ರಕ್ಕೆ ಜೀವ ತುಂಬುತ್ತಾರೆ. ಮುಖ್ಯಮಂತ್ರಿಯಾಗಿ ಏಕಕಾಲದಲ್ಲಿ ನಮ್ಮ ಮಾಜಿ ಮುಖ್ಯಮಂತ್ರಿಗಳನ್ನು, ಹಾಲಿ ಮುಖ್ಯಮಂತ್ರಿಗಳನ್ನು ನೆನೆಪಿಸುತ್ತಾರೆ. ವಿ.ಮನೋಹರ್ ಸಂಗೀತ ಓಕೆ. ಸುಂದರ್ ನಾಥ ಸುವರ್ಣರ ಛಾಯಾಗ್ರಹಣ ಕಣ್ ಸೆಳೆಯುತ್ತದೆ.
ಕೊನೆಯದಾಗಿ, ನಿಮಗೆ time ಜಾಸ್ತಿ ಇದ್ದು, ಮಾಡಲು ಕೆಲಸವಿಲ್ಲದ್ದಿದ್ದಲ್ಲಿ ಈ ಚಿತ್ರ ನೋಡಬಹುದು.
Subscribe to:
Posts (Atom)
